ರಾಜ್ಯದಲ್ಲಿಂದು 1189 ಹೊಸ ಪಾಸಿಟಿವ್ ಪ್ರಕರಣ, 22 ಸೋಂಕಿತರು ಸಾವು | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1189 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 22 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
1456 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,80,889 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 20,556ರಷ್ಟಿವೆ. 22 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,145ಕ್ಕೆ ಏರಿದೆ. ಕೋವಿಡ್ ಡೆತ್ ರೇಟ್ 1.85%ರಷ್ಟಿದೆ.
ಬೆಂಗಳೂರಿನಲ್ಲಿಂದು 267 ಹೊಸ ಪ್ರಕರಣ ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 286 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 300 ಹಾಗೂ ದಕ್ಷಿಣ ಕನ್ನಡದಲ್ಲಿ 418 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ದಕ್ಷಿಣ ಕನ್ನಡದಲ್ಲಿ 4 ಜನ ಸೋಂಕಿಗೆ ಬಲಿಯಾಗಿದ್ದರೆ, ಇತ್ತ ಬೆಂಗಳೂರಿನಲ್ಲಿ 2 ಸೋಂಕಿತರು ಮೃತ ಪಟ್ಟಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-4, ಬಳ್ಳಾರಿ-5, ಬೆಳಗಾವಿ -34, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-267, ಬೀದರ್-3, ಚಾಮರಾಜನಗರ-8, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-50, ಚಿತ್ರದುರ್ಗ-10, ದಕ್ಷಿಣ ಕನ್ನಡ-286, ದಾವಣಗೆರೆ-19, ಧಾರವಾಡ-4, ಗದಗ-2, ಹಾಸನ-75, ಹಾವೇರಿ-1,ಕಲಬುರಗಿ-0, ಕೊಡಗು-55, ಕೋಲಾರ-8, ಕೊಪ್ಪಳ-1, ಮಂಡ್ಯ-19, ಮೈಸೂರು-79, ರಾಯಚೂರು-1, ರಾಮನಗರ-5, ಶಿವಮೊಗ್ಗ-24, ತುಮಕೂರು-39, ಉಡುಪಿ-132, ಉತ್ತರ ಕನ್ನಡ-40, ವಿಜಯಪುರ-2, ಯಾದಗಿರಿ-3.